
ನವನಗರದ ವೀರಶೈವ ಸಮಾಜ ಸಂಘಟನಾ ಸಮಿತಿಯ ಆಶ್ರಯದಲ್ಲಿ ಈ ವರ್ಷದ ಬಸವ ಜಯಂತಿಯ ಅಂಗವಾಗಿ ಏಪ್ರೀಲ 18 ಶನಿವಾರದಂದು, ಸಮೀತಿಯ ಸತ್ಯಾನ್ವೇಷಣ ಮಂದಿರದಲ್ಲಿ ಬೆಳಿಗ್ಗೆ ೧೦ ಘಂಟೆಗೆ ವಚನ ಗಾಯನ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ರಹವಾಸಿಗಳು ಮಾತ್ರ ಈ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
ಈ ಸ್ಪರ್ಧೆಗಳನ್ನು ೩ ವಿಭಾಗಗಳಲ್ಲಿ ನಡೆಸಲಾಗುತ್ತಿದ್ದು ಪ್ರತಿ ವಿಭಾಗದಲ್ಲಿ ೩ ಪ್ರಶಸ್ತಿಗಳನ್ನು ನೀಡಲಾಗುವುದು. ಆಸಕ್ತರು ಏಪ್ರೀಲ ೧೭ ರ ಒಳಗಾಗಿ ತಮ್ಮ ಹೆಸರನ್ನು ,ನವನಗರದ ೨ನೇ ಬಸ್ ಸ್ಟಾಪ ಹತ್ತಿರವಿರುವ ವೀರಶೈವ ಸಮಾಜ ಸಂಘಟನಾ ಸಮೀತಿಯ ಕಛೇರಿಯಲ್ಲಿ ನೊಂದಾಯಿಸಬಹುದು ಎಂದು ಅಧ್ಯಕ್ಷರು, ಕಾರ್ಯದರ್ಶಿ ಸಮೇತ ಎಲ್ಲ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

