
ಶ್ರೀ ಕೃಷ್ಣ ಬಾಲಲೀಲೆಗಳೆಂದರೆ ಮಕ್ಕಳಿಂದ ಮುದುಕರ ತನಕ ಎಲ್ಲರಿಗೂ ಅಚ್ಚುಮೆಚ್ಚು. ಪ್ರತಿಯೋರ್ವ ತಾಯಿ ತನ್ನ ಮಗುವಿಗೆ ಒಮ್ಮೆಯಾದರೂ ಶ್ರೀ ಕೃಷ್ಣ ಪರಮಾತ್ಮಾನ ವೇಷ ತೊಡಿಸಿ ಸಂಭ್ರಮ ಪಡುವುದನ್ನು ಕಾಣುತ್ತೇವೆ. ಅದರಂತೆ ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಬೇರೆ ಬೇರೆ ಊರುಗಳಲ್ಲಿ ಶ್ರೀ ಕೃಷ್ಣ ಪರಮಾತ್ಮನ ವಿವಿಧ ವೇಷಗಳನ್ನು ಮಕ್ಕಳು ಪ್ರದರ್ಶಿಸುತ್ತಾರೆ.


ಈ ವರ್ಷ ಉಡುಪಿಯ ಕೃಷ್ಣ ಮಠದಲ್ಲಿ ಮುದ್ದು ಕೃಷ್ಣವೇಷಧಾರಿಗಳ ಕಲರವ ಜೋರಾಗಿತ್ತು. ಅವರಿಂದ ಕೃಷ್ಣಮಠದಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಣಮಿಯ ಸಂಭ್ರಮ ಕಳೆಗಟ್ಟಿತ್ತು. ಉಡುಪಿ ಶ್ರೀ ಕೃಷ್ಣ ಮಠದ ಅನ್ನಬ್ರಹ್ಮ ಛತ್ರದಲ್ಲಿ ನೆಡೆದ ಜೂನಿಯರ್ ಮುದ್ದು ಕೃಷ್ಣ ಸ್ಪರ್ಧೆ ಯನ್ನು ಶ್ರೀ ಶಿರೂರು ಮಠದ ೩೧ನೇ ಯತಿವರ್ಯರಾದ ಶ್ರೀಮದ್ ವೇದವರ್ಧನ ತೀರ್ಥ ಶ್ರೀಪಾದರು ಮಕ್ಕಳ ಲೀಲೋತ್ಸವವನ್ನು ವೀಕ್ಷಿಸಿ ಸಂತಸ ಗೊಂಡರು,


ತೀರ್ಪುಗಾರರೊಂದಿಗೆ ಶ್ರೀಗಳಿರುವ ಗ್ರೂಪ್ ಫೋಟೋದೊಂದಿಗೆ ವಿವಿಧ ಮಕ್ಕಳು ಪ್ರದರ್ಶಿಸಿದ ಬಾಲಕೃಷ್ಣ ವೇಷಧಾರಿಗಳು.





